ಡಿಜಿಟಲ್ ಕನ್ನಡ ಟೀಮ್:
ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿನ ನಾಲ್ಕು ಜಲಾಶಯಗಳಲ್ಲಿ ನೀರಿನ ಅಭಾವ ತಾಂಡವವಾಡುತ್ತಿದೆ. ಅದರಲ್ಲೂ 49 ಟಿಎಂಸಿ ಸಾಮರ್ಥ್ಯದ ಕೆ.ಆರ್.ಎಸ್ ಜಲಾಶಯದಲ್ಲಿ ಈಗ ಇರೋದು ಕೇವಲ 14.8 ಟಿಎಂಸಿ ನೀರು ಆಪೈಕಿ ಬಳಕೆಯಾಗಬಹುದಾದ ನೀರಿನ ಪ್ರಮಾಣ 10.3 ಟಿಎಂಸಿ. ಇನ್ನು ಹೇಮಾವತಿಯಲ್ಲಿ 7.75 ಟಿಎಂಸಿ ನೀರಿದ್ದು, 3.75 ಟಿಎಂಸಿ ನೀರು ಮಾತ್ರ ಬಳಸಿಕೊಳ್ಳಬಹುದು, ಕಬಿನಿಯಲ್ಲಿ 12 ಟಿಎಂಸಿ ನೀರಿದ್ದು, 2.5 ಟಿಎಂಸಿ ನೀರನ್ನು ಮಾತ್ರ ಬಳಕೆಗೆ ಸಿಗಲಿದೆ. ಇನ್ನು ಹಾರಂಗಿ ಜಲಾಶಯದಲ್ಲಿ 5.8 ಟಿಎಂಸಿಯಷ್ಟು ಮಾತ್ರ ನೀರಿದೆ.
ಕಳೆದ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೃಷ್ಣರಾಜ ಸಾಗರ ಜಲಾಶಯದಲ್ಲಿನ ನೀರಿನ ಮಟ್ಟ ಇಷ್ಟು ಪ್ರಮಾಣಕ್ಕೆ ಕುಸಿತ ಕಂಡಿದೆ. ನಿನ್ನೆ ಕೆ.ಆರ್.ಎಸ್ ಜಲಾಶಯದಲ್ಲಿ ಪತ್ರಕರ್ತರ ಸಮೀಕ್ಷೆಯನ್ನು ನಡೆಸಲಾಗಿತ್ತು. ಆ ವೇಳೆ ಕೆ.ಆರ್.ಎಸ್ ಜಲಾಶಯದ ಪರಿಸ್ಥಿತಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…