ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಆರೋಪಕ್ಕೆ ಸರ್ಕಾರದ ಸಚಿವರುಗಳು ನೀಡಿದ ಸ್ಪಷ್ಟನೆ ಹೀಗಿದೆ…
ಅಶೋಕ್:
- ಸಿದ್ದರಾಮಯ್ಯ ಹಾಗೂ ಹೊಸದಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರು ಸರ್ಕಾರದ ಮೇಲೆ ಭೃಷ್ಟಾರಾದ ಆರೋಪ ಮಾಡಿದ್ದಾರೆ
- 50 ವರ್ಷ ಈ ರಾಜ್ಯವನ್ನು ಆಳಿದ ಪಕ್ಷ. ರಾಜ್ಯವನ್ನು ಲೂಟಿ ಮಾಡಿದ ಪಕ್ಷ.
- ಕೋವಿಡ್ ಸಮಯದಲ್ಲಿ ಸರ್ಕಾರಕ್ಕೆ ಸಲಹೆ ಕೊಡಬೇಕಾದ ಪಕ್ಷ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪಿತೂರಿಯನ್ನು ಕಾಂಗ್ರೆಸ್ ನಾಯಕರು ಮಾಡ್ತಾ ಇದ್ದಾರೆ.
- ವೆಂಟಿಲೇಟರ್ ನಲ್ಲಿ ಅವ್ಯವಹಾರ ಆಗಿದೆ ಅಂತ ಹೇಳಿದ್ರು. ಆದರೆ ಅವರು ಅಧಿಕಾರದಲ್ಲಿದ್ದಾಗ
ಪಕ್ಕದ ರಾಜ್ಯಕ್ಕಿಂತ ಹೆಚ್ಚು ಬೆಲೆಗೆ ಖರೀದಿ ಮಾಡಿದ್ದಾರೆ. - 2019 ಜನವರಿಯಲ್ಲಿ ಯಾರು ಅಧಿಕಾರದಲ್ಲಿದ್ದರು. ಅವರು ಆತ್ಮಲೋಕ ಮಾಡಿಕೊಳ್ಳಬೇಕು. 2019 ಜನವರಿಯಲ್ಲಿ 14 ಲಕ್ಷಕ್ಕೆ 9 ಯೂನಿಟ್, ಆಗಸ್ಟ್ ನಲ್ಲಿ 15 ಲಕ್ಷದ 12 ಸಾವಿರಕ್ಕೆ 28 ಯೂನಿಟ್ ಕೊಂಡಿದ್ದಾರೆ.
- 2019 ರಲ್ಲಿ ಜನವರಿಯಲ್ಲಿ 21 ಲಕ್ಷ 93 ಸಾವಿರ ರೂ.ಗೆ 9 ಯುನಿಟ್ ಖರೀದಿ ಮಾಡಿದ್ದಾರೆ. ಇವರೇನು ಚಂದ್ರಲೋಕದಿಂದ ಖರೀದಿ ಮಾಡಿದ್ದ ಅದನ್ನು.
- ಐ ಫ್ಲೋ ನಾಸಲ್ ನ್ನು 2,94,835 ರೂ.ಗೆ ಕೇರಳ ಖರೀದಿ ಮಾಡಿದೆ. ನಾವು 2,83,000 ಕಡಿಮೆ ಬೆಲೆಗೆ ಖರೀದಿ ಮಾಡಿದ್ದೇವೆ.
- ಕಡಿಮೆ ಬೆಲೆಗೆ ಖರೀದಿ ಮಾಡಿದ್ದೇವೆ ಅದನ್ನು ಸಿದ್ದರಾಮಯ್ಯ ಪ್ರಶ್ನಿಸಿಲ್ಲ. ನಮ್ಮ ಅಧಿಕಾರಿಗಳು ಪ್ರಾಮಾಣಿಕವಾಗಿ ಹೆಚ್ಎಸ್ಎಂಸಿಯನ್ನು ಖರೀದಿ ಮಾಡಿದ್ದಾರೆ. ಒಟ್ಟು 232 ಕೋಟಿ ಖರ್ಚು ಆಗಿರೋದು. ಅದೂ ಡಿಸಿಗಳ ಮೂಲಕ ಖರ್ಚು ಆಗಿರೋದು.
- ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಯಾರು ಹೋಗಿಲ್ಲ ಆಸ್ಪತ್ರೆಗೆ, ನಾನು ಮಾತ್ರ ಹೋಗಿದ್ದು ಅಂತ ಹೇಳ್ತಾ ಇದ್ದಾರೆ. ಅವರು ಹೆದರಿಕೊಂಡು ಹೋಗಿದ್ದಾರೆ. ಅದು ಕೇವಲ ಒಂದು ಆಸ್ಪತ್ರೆಗೆ ಹೋಗಿ ಕಾಲರ್ ಮೇಲೆ ಮಾಡುವ ಅಗತ್ಯ ಇಲ್ಲ. ನಾವು ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದೇವೆ.
- ಡಿಕೆಶಿ ಬಹುಶಃ ನಮಗೆ ಕೇಳಿದ್ದು ಅಲ್ಲ. ಪಕ್ಕದಲ್ಲಿ ಕೂತವರಿಗೆ ಕೇಳಿದ್ದಾರೆ ಅಂತ ಕಾಣಿಸುತ್ತದೆ.
ಅವರು (ಸಿದ್ದರಾಮಯ್ಯ) ಯಾವ ಆಸ್ಪತ್ರೆಗೂ ಹೋಗಿಲ್ಲ. - ಮನೆ ಮುಂದೆ ಬೋರ್ಡ್ ಹಾಕೊಂಡಿದ್ದಾರೆ. ಯಾರೂ ಮನೆಗೆ ಬರಬೇಡಿ ಅಂತಾ.
- ಕೌರವರಿಗೆ ಪಂಚ ಪಾಂಡವರು ಉತ್ತರ ಕೊಡ ಬೇಕು ಅಲ್ವಾ?
ಅದಕ್ಕೆ ನಾವು ಬಂದಿದ್ದೇವೆ. - ಯಾರು ಪಾಂಡವರು, ಯಾರು ಕೌರವರು ಇಡೀ ದೇಶ ನೋಡಿದೆ
- ದೇಶದಲ್ಲಿ ಕೌರವರ ಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ.
- ಕಾಂಗ್ರೆಸ್ ಪಾರ್ಟಿ ಅವರು ಬುದ್ಧಿಗೂ ಸ್ಯಾನಿಟೈಸ್ ಮಾಡಲಿ.
- 5 ಲಕ್ಷ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸಿ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದಾರೆ.
- ಅವರು ಟಾಟಾ ಮಾಡಿದ್ದು ಬಿಟ್ಟರೆ, ಬರೇ ಚೆಕ್ ಹಿಡಿದು ತೋರಿಸಿದ್ದು ಮಾಡಿದ್ದಾರೆ.
- ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ದೊಡ್ಡ ಸರದಾರ
- ತುಮಕೂರು ರಸ್ತೆ ಸಿಸಿಸಿ ಕೇಂದ್ರದಲ್ಲಿ ಅವ್ಯವಹಾರ ಆಗಿದೆ ಎಂದಿದ್ದಾರೆ.
- ನಿಮ್ಮ ಆಂಜನೇಯರನ್ನು ದಿಂಬು ಬೆಡ್ ವಿವರ ಕೇಳ ಬೇಕು. ನಾವು ಒಂದೂ ರೂ.ವನ್ನು ದಿಂಬು, ಬೆಡ್ ಗೆ ಕೊಟ್ಟಿಲ್ಲ.
- ನೀವೆಲ್ಲಾ ಕೊರೊನಾ ಬರುತ್ತೆ ಎಂದು ಹೆದರಿ ಗೂಡು ಸೇರಿದ್ದೀರ. ನೀವು ಇಡೀ ದೇಶ, ರಾಜ್ಯದಲ್ಲಿ ಗೂಡು ಸೇರುತ್ತೀರಾ.
- ಕಾಂಗ್ರೆಸ್ ನಾಯಕರು ಮಾಡಿರೋ ಆರೋಪ ಅಪ್ಪಟ ಸುಳ್ಳು.
- ಕಾಂಗ್ರೆಸ್ ನಾಯಕರು ಒಬ್ಬರನ್ನು ಕೋವಿಡ್ ಸೊಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ರಾ? ಆರೋಪ ಮಾಡೋದು ಬಿಟ್ಟು ಕೆಲಸ ಮಾಡಿ.
- ನಮ್ಮ ಅಧಿಕಾರಿಗಳು ಮೂರು ತಿಂಗಳು ಅವರ ಕುಟುಂಬ ನೋಡಿಲ್ಲ. ಅವರ ಮಾನಸಿಕ ಸ್ಥಿತಿ ಕುಗ್ಗಿಸಬೇಡಿ
ಅಶ್ವತ್ಥ ನಾರಾಯಣ್
- ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಾರಿ ಬಾರಿ ಅಪಾದನೆ ಮಾಡ್ತಾ ಇದ್ದಾರೆ.
- ಅವರಿಗೆ ಏನು ದಾರಿ ಕಾಣ್ತಾ ಇಲ್ಲ. ಅವರು ಬೇಸ್ ಲೆಸ್ ಆರೋಪ ಮಾಡ್ತಾ ಇದ್ರು. ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಇದ್ರು. ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇರಲಿಲ್ಲ.
- ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡ್ತಾ ಇದ್ರು.
- ಅವರ ಆರೋಪಕ್ಕೆ ಉತ್ತರ ಕೊಟ್ಟಿದ್ದೇವೆ. ಇವತ್ತು ನಿರಾಧಾರವಾಗಿ ಆರೋಪ ಮಾಡಿದ್ದಾರೆ. ಅವರು ಕೇಳಿದ ಎಲ್ಲಾ ಇಲಾಖೆಯಿಂದ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಉತ್ತರ ಕೊಡ್ತೇವೆ.
- 750 ಕೋಟಿ ಆರೋಗ್ಯ ಇಲಾಖೆಯಲ್ಲಿ ಖರ್ಚು ಮಾಡಿದ್ದಾರೆ ಅನ್ನೋ ದು ಆರೋಪ.
- 290 ಕೋಟಿ ಮಾತ್ರ ಇಲ್ಲಿಯವರೆಗೆ ಖರ್ಚು ಮಾಡಿದ್ದು.
- ಪಿಪಿಇ ಕಿಟ್ ಅನ್ನು ಮಾರ್ಚನಲ್ಲಿ ೧ ಲಕ್ಷ ಕಿಟ್ ಗಳನ್ನು ೩೩೦ರೂ ಗೆ ಖರೀದಿ. ಚೈನಾದಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ ಅಂತ. ಆರೋಪ ಮಾಡಿದ್ರು.
- ಡಿಕೆಶಿಯನ್ನು ದುರ್ಯೋಧನನಿಗೆ ಹೋಲಿಸಿದ ಸುಧಾಕರ್. ಅವರ ಸ್ಟೈಲ್ನಲ್ಲಿ ಗೊತ್ತಾಗುತ್ತೆ ಯಾರು ಕೌರವರು ಅಂತ.
- ಇಡೀ ದೇಶಕ್ಕೆ ಗೊತ್ತಿದೆ ಕೌರವರು ಯಾರು ಎಂದು.
- ೨೧೧೮ ಕೋಟಿ ಒಟ್ಟಾರೆ ಎಲ್ಲಾ ಇಲಾಖೆಯಿಂದ ಸೇರಿ ಖರ್ಚು ಆಗಿರೋದು
ಬಸವರಾಜ್ ಬೊಮ್ಮಾಯಿ
- 4,167 ಕೋಟಿ ರೂ. ಒಟ್ಟು ಅಕ್ರಮ ಆಗಿದೆ ಎಂದಿದ್ದಾರೆ. ಎಲ್ಲಾ ಇಲಾಖೆಯಿಂದ 506 ಕೋಟಿ ರೂ. ಮಾತ್ರ ಖರ್ಚಾಗಿದೆ.
- ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ, ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ ಬಾಧಿತರ ಪರಿಹಾರ ಕ್ರಮಗಳಿಗೆ 1611.7 ಕೋಟಿ ರೂ. ಒಟ್ಟು 2,118 ಕೋಟಿ ರೂ. ಮಾತ್ರ ಖರ್ಚಾಗಿದೆ.
- ಯಾವುದೇ ಥರ್ಮಲ್ಸ್ಕಾನಿಂಗ್ ಖರೀದಿಯಾಗಿಲ್ಲ. ಆ ಅರ್ಡರ್ ಕ್ಯಾನ್ಸಲ್ ಆಗಿದೆ.
- ೯ಸಾವಿರ ಥರ್ಮಲ್ ಸ್ಕಾನಿಂಗ್ ಖರೀದಿ ಆಗಿಲ್ಲ.
- ಕೋವಿಡ್ ಸಂದರ್ಭದಲ್ಲಿ ಮಾಡಿರೋ ಆರೋಪ ಅಮಾನವೀಯ.
- ಕೋವಿಡ್ ಬೆಂಕಿಯಲ್ಲಿ ರಾಜಕೀಯ ರೊಟ್ಡಿ ಬೇಯಿಸ್ತಾ ಇದ್ದಾರೆ. ಕಾಂಗ್ರೆಸ್ನವರು ಹತಾಶರಾಗಿದ್ದಾರೆ.
- ಯಾರು ಲೀಡರ್ ಅಂತ ಕಿತ್ತಾಟ ನಡೆಯುತ್ತಾ ಇದೆ.
- ನಮ್ಮ ಸಲಕರಣೆಗಳಿಗೆ ಖರ್ಚು ಮಾಡಿರೋದು ೪೦೬ ಕೋಟಿ ರೂ..ಮಾತ್ರ.
- ಅವರ ಸರ್ಕಾರದಲ್ಲಿ ಎಲ್ಲಿ ಮುಟ್ಟಿ ತ್ತೀರಾ ಅಲ್ಲೆಲ್ಲ ಬರೀ ಅವ್ಯವಹಾರವೇ.
- ಜನ ಇನ್ನೂ ನಿಮ್ಮ ಅವ್ಯವಹಾರ ಮರೆತಿಲ್ಲ.
- ಸುಳ್ಳಿನ ಸರದಾರರು ಆಗಬೇಡಿ. ಸತ್ಯದ ಬಲ ನಮ್ಮ ಸರ್ಕಾರದ ಜತೆ ಇದೆ.
- ಲೆಕ್ಕ ಕೊಡಿ ಅಂತ ಹೇಳಿದ್ರು
- ಅವರಿಗೆ ಲೆಕ್ಕ ಕೊಟ್ಟಿದ್ದೇವೆ, ಇನ್ನೂ ಕೊಡ್ತೇವೆ.
- ಆದ್ರೆ ಕಾಂಗ್ರೆಸ್ ಮಾಡಿರುವ ಅವ್ಯವಹಾರಕ್ಕೆ ಯಾವಾಗಾ ದಾಖಲೆ ಬಿಡುಗಡೆ ಮಾಡುತ್ತಾರೆ?
ಸುಧಾಕರ್
- ವಿರೋಧ ಪಕ್ಷ ದವರು ಮಾಡಿರೋ ಆರೋಪ ಷೇಮ್.
- ಅವರ ತಟ್ಟೆಯಲ್ಲಿ ಹೆಗ್ಗಣ ಇಟ್ಡುಕೊಂಡು ನಮ್ಮ ತಟ್ಟೆಯಲ್ಲಿ ನೊಣ ಹುಡುಕ್ತಾ ಇದ್ದಾರೆ.
- ಯಾರು ಭೃಷ್ಣಾಚಾರದ ಬಗ್ಗೆ ಮಾತಾಡ್ತಾ ಇರೋದು
- ಭೃಷ್ಟಾಚಾರದ ಕೂಪವನ್ನೆ ನಿಮ್ಮಲ್ಲಿ ಇಟ್ಟು ಕೊಂಡಿದ್ದೀರಿ
- ಪ್ರಸ್ತಾವನೆಗೆ ಅನುಮೋದನೆಗೆ ವ್ಯತ್ಯಾಸ ಗೊತ್ತಿಲ್ವಾ ?
- 815 ಕೋ ಮೆಡಿಕಲ್ ಉಪಕರಣ ಖರೀದಿ ಮಾಡಿದ್ದೀರಿ ಅಂತ ಹೇಳಿದ್ದಾರೆ.
- ಸಚಿವರು ಅಧಿಕಾರಿಗಳು ಕಳೆದ ೧೨೦ದಿನದಿಂದ ಒಂದು ದಿನ ರಜೆ ಮಾಡಿಲ್ಲ
- *ಒಂದು ರೂ ಭೃಷ್ಟಾಚಾರ ಮಾಡಿದ್ರೆ ನೇಣಿಗೆ ಬಹಿರಂಗ ಹಾಕಿ ಎಲ್ಲರನ್ನೂ*
- ೧೪೦ ವೆಂಟಿಲೇಟರ್ ಆರ್ಡರ್ ಮಾಡಿದ್ದೇವೆ ಬಂದಿದೆ ಅಷ್ಟು
- ಒಂದಕ್ಕೆ ೧೩.೬೦ ಲಕ್ಷ ರೂ ಪ್ರತಿ ಐಸಿಯೂ
- ವಿಶ್ವದ ನಂಬರ್ ವನ್ ಕಂಪನಿ ಡ್ರಾಗನ್ ಕಂಪನಿಯಿಂದ ಖರೀದಿ. ನಾವು ಖರ್ಚು ಮಾಡಿದ್ದು ಕೇವಲ ೩೩ಕೋ ರೂ ಮಾತ್ರ.
- ಮಾಹಿತಿ ಇಲ್ಲದೇ ಮಾತಾಡೋದು ಕೂಡ ಅಪರಾಧ.
- ಆರ್ ಟಿ ಐ ಮೂಲಕ ದಾಖಲೆ ಪಡೆಯಿರಿ.
- ರಾಜಕೀಯವಾಗಿ ಕಾಂಗ್ರೆಸ್ ಅನ್ನು ಉದ್ದಾರ ಮಾಡೋದು ಅವರ ಪ್ಲಾನ್
- ಮಾತು ಎತ್ತಿದ್ರೆ, ರೈಲ್ವೆ ಸ್ಟೇಷನ್ ಬಸ್ ಸ್ಯಾಂಡ್ ಗೆ ಹೊಗ್ತಾರೆ.
- ಈ ಬಗ್ಗೆ ಯಾವ ತನಿಖೆಗೆ ನಾವು ಸಿದ್ದವಿದ್ದೇವೆ .
- ಇಲಾಖಾವಾರು ಮಾಹಿತಿ ಕೊಡಲು ಸಿದ್ದ ನಾವು.
- 815ಕೋಟಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಗರಣ ಆಗಿದೆ ಅಂತಾರೆ. ನಾವು ಹತ್ತು ಐಟಮ್ ಖರೀದಿ ಮಾಡಿರೋದು. ಒಟ್ಟು ಖರೀದಿ ೩೩ ಕೋಟಿ ರೂ ಮಾತ್ರ.
- ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರ. ಅವರು ಕೇಳಿದ ಪ್ರಶ್ನೆಗೆ ಸಮಾಧಾನಕರವಾಗಿ ಉತ್ತರ ನೀಡಬೇಕು ಅಲ್ವಾ ನಾವು.
- ಅಧಿಕಾರಿಗಳ ಮನೋಧೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ. ಇನ್ನಾದ್ರೂ ಸತ್ಯವನ್ನು ಅರಿತು ಮಾತಾಡಿ.
ಶಿವರಾಮ್ ಹೆಬ್ಬಾರ್:
- ಕಾರ್ಮಿಕ ಇಲಾಖೆ ಯಲ್ಲಿ ೧ಸಾವಿರ ಕೋಟಿ ಅವ್ಯವಹಾರ ಆಗಿದೆ ಅಂತ ಹೇಳಿದ್ದಾರೆ.
- 816 ಕೋಟಿ ರೂಪಾಯಿ ಹಣವನ್ನು ಜನರ ಅಕೌಂಟ್ ಗೆ ಹಾಕಿದ್ದೇವೆ
- 72ಕೋಟಿ ಹಣವನ್ನು ಬೇರೆ ಕಡೆಯಿಂದ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದೇವೆ.